ತಿರುವನಂತಪುರಂ | ನಿಜವಾದ ಧಾರ್ಮಿಕ ಮೌಲ್ಯಗಳು ಸಮೂಹಕ್ಕೆ ತಲುಪಿಸಲು ಸಾಧ್ಯವಾದ ನಾಯಕರಾಗಿದ್ದಾರೆ ಕಾಂತಪುರಂ ಎ.ಪಿ.ಅಬೂಬಕರ್ ಎಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದರು. ಇಂಡಿಯನ್ ಗ್ರಾಂಡ್ ಮುಫ್ತಿ ಎಪಿ ಉಸ್ತಾದರ ಆತ್ಮ ಕಥೆ 'ವಿಶ್ವಾಸಪೂರ್ವಂ' ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಪಟ್ಟಭದ್ರ ಹಿತಾಸಕ್ತಿಗಾಗಿ ಅಭಿವೃದ್ಧಿಯನ್ನು ವಿರೋಧಿಸುವ ಹಂತದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಕಾಂತಪುರಂ ಅವರ ಜೀವನಗಾಥೆ ಹೇಳುತ್ತದೆ. ಪ್ರತಿಯೊಂದು ವಿಷಯದಲ್ಲೂ ಸೂಕ್ತವಾದ ನಿಲುವುಗಳನ್ನು ವ್ಯಕ್ತಪಡಿಸಲು ಉಸ್ತಾದರಿಗೆ ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮರ್ಕಝ್ ನಾಲೆಜ್ ಸಿಟಿ ಕೇಂದ್ರವಾಗಿ ಕಾರ್ಯಚರಿಸುತ್ತಿರುವ ಮಲೈಬಾರ್ ಫೌಂಡೇಶನ್ ಫಾರ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಪ್ರಕಾಶಿಸುವ , ಈ ಪುಸ್ತಕವನ್ನು ಕೋಝಿಕ್ಕೋಡ್ ಮೂಲದ ರೀಡ್ ಪ್ರೆಸ್ ವಿತರಿಸಿದೆ.
ಸಮಸ್ತ ಕೇರಳ ಜಮೀಯ್ಯತುಲ್ ಉಲಮಾದ ಉಪಾಧ್ಯಕ್ಷ ಸೈಯದ್ ಅಲಿ ಬಾಫಕಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್ವೈಎಸ್ ರಾಜ್ಯ ಕಾರ್ಯದರ್ಶಿ ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ಪ್ರಾಸ್ತಾವಿಕ ಉಪನ್ಯಾಸ ನೀಡಿದರು. ಸಚಿವ ಪಿ.ರಾಜೀವ್, ಮಾಜಿ ಕೇಂದ್ರ ಸಚಿವ ವಿ.ಮುರಳೀಧರನ್, ಶಾಸಕ ಪಿ.ವಿ.ಅನ್ವರ್, ಉದ್ಯಮದ ಪ್ರಮುಖರಾದ ಡಾ. ಸಿದ್ದೀಕ್ ಅಹ್ಮದ್, ಟಿ.ಎನ್.ಎಂ.ಜವಾದ್, ವಂದೂರು ಅಬ್ದುರ್ರಹ್ಮಾನ್ ಫೈಝಿ, ಸೈಯದ್ ತ್ವಾಹ ಸಖಾಫಿ ಕುಟ್ಯಾಡಿ ಹಾಗೂ ಫಿರ್ದೌಸ್ ಸಖಾಫಿ ಕಡವತ್ತೂರು ಮಾತನಾಡಿದರು
ಶಾಸಕರಾದ ಅಡ್ವ. ಪಿಟಿಎ ರಹೀಮ್, ಅಹ್ಮದ್ ದೇವರಕೋವಿಲ್, ಸಚಿನ್ ದೇವ್, ಲಿಂಟೋ ಜೋಸೆಫ್, ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಡ್. ಎ.ಎ.ರಶೀದ್, ರಾಜ್ಯ ಮಾಹಿತಿ ಹಕ್ಕು ಆಯುಕ್ತ ಎ.ಎ.ಹಕೀಂ ನಹಾ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಎ.ಸೈಫುದ್ದೀನ್ ಹಾಜಿ ಮತ್ತು ಎ.ಪಿ.ಅಬ್ದುಲ್ ಕರೀಂ ಹಾಜಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನೂರುದ್ದೀನ್ ಮುಸ್ತಫಾ ಸ್ವಾಗತಿಸಿ, ಸಿದ್ದೀಕ್ ಸಖಾಫಿ ಧನ್ಯವಾದಗೈದರು
.
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb