✍️ *ಅತಾವುಲ್ಲ ಹಿಮಮಿ ಸಖಾಫಿ ಕುಪ್ಪೆಟ್ಟಿ* ||
ಒಂದು ವರ್ಷದ ಸಹದ್ಯೋಗಿ ಸನ್ಮಿತ್ರ ಹಾಫಿಳ್ ಹನೀಫ್ ಸಅದಿ ಉಸ್ತಾದರ ಮರಣವಂತೂ ಹೃದಯ ಬಡಿತವನ್ನೇ ಅತಿಯಾಗಿಸಿತು.ಪವಿತ್ರ ರಮಳಾನಿನ ವೃತಾಚರಣೆ ಮುಗಿಸಿ ಪೆರ್ನಾಳ್ ಆಚರಣೆಗೆ ಮೂರುಗೋಳಿ ಮಸೀದಿಯಲ್ಲಿ ಜೊತೆಯಾದಾಗ ರಮಳಾನಿನ ಕುಟುಂಬ ಜೀವನವನ್ನು ಕೇಳಿ ತಿಳಿದುಕೊಂಡೆ.ತಾಯಿ ಹಾಗೂ ಪತ್ನಿಯ ಅನಾರೋಗ್ಯದಿಂದ ಮನೆಯಲ್ಲಿಯೇ ಇರಬೇಕಾಯಿತೆಂಬ ಭಾವನಾತ್ಮಕ ಮಾತುಗಳ ಬಳಿಕ 15 ಖತಂಗಳನ್ನು ಪೂರ್ತಿಗೊಳಿಸಲು ಸಾಧ್ಯವಾಯಿತೆಂಬ ಅವರ ನಿಟ್ಟುಸಿರು ನನ್ನನ್ನು ನಾಚುವಂತೆ ಮಾಡಿತು..
ಕೆಲವೊಂದು ಬಾರಿ ಧಾರ್ಮಿಕ ಭಾಷಣಗಳು ಹಾಗೂ ಸಂಘಟನಾ ಕಾರ್ಯಾಚರಣೆಗಾಗಿ ತೆರಳಬೇಕಾಗಿ ಬಂದಾಗ ಸಹದ್ಯೋಗಿಯಾಗಿ ಅವರು ನಿಭಾಯಿಸಿದ ಕರ್ತವ್ಯ ನಾನೆಂದಿಗೂ ಮರೆಯಲಾರೆ.ಕೆಲವೊಂದು ಹಿರಿಯರು ಆರಾಧನಾ ಸಂಶಯಗಳನ್ನು ಕೇಳುತ್ತಾ ಬರುವಾಗ ತನ್ನಲ್ಲಿ ಅಪಾರ ಜ್ಞಾನವಿದ್ದರೂ ಬೆಲಿಯ ಉಸ್ತಾದರಲ್ಲಿ ಕೇಳಿ ನೋಡಿ ಎನ್ನುತ್ತಾ ಕಿರಿಯವನಾದ ನನ್ನ ಕಡೆ ಬೆರಳು ತೋರಿಸುತ್ತಾ ನೀಡುತ್ತಿದ್ದ ಅವರ ವಿನಯಾತ್ಮಕ ಮನೋಭಾವ ಮತ್ತೇ ಮತ್ತೇ ನೆನಪಿಸುತ್ತಿದೆ. ಕೆಲವೊಮ್ಮೆ ರಾತ್ರಿ ನಿದ್ರೆಯಿಲ್ಲದೆ ಬೆಳಗ್ಗಿನ ತರಗತಿಗಳ ಬಳಿಕ ವಿಶ್ರಾಂತಿ ಪಡೆಯುತ್ತಿದ್ದ ನನ್ನ ಕೊಠಡಿಗೆ ಯಾರಾದರೂ ಮಾತನಾಡಿಸಲು ಬಂದರೆ ಒಂದಲ್ಪ ಸಮಯ ಕಳೆದು ಬನ್ನೀ ಎನ್ನುತ್ತಾ ಸಹದ್ಯೋಗಿಯಾದ ನನಗೆ ವಿಶ್ರಾಂತಿಯನ್ನು ನೀಡಿ ಆ ಸ್ಥಾನವನ್ನು ನಿಭಾಯಿಸುತ್ತಿದ್ಧ ಅವರ ಗುಣ ಮಾದರೀಯೋಗ್ಯ.
ಅಲ್ಲಾಹನು ಉಸ್ತಾದರ ಮುಂದಿನ ಯಾತ್ರೆಯನ್ನು ಸುಗಮಗೊಳಿಸಲಿ.ಜನ್ನತ್ ನೀಡಿ ಅನುಗ್ರಹಿಸಲಿ...... ವಾರಕ್ಕೆ ಒಂದು ಬಾರಿ ತನ್ನ ಮಕ್ಕಳ ಆಸೆಯಂತೆ ಅವರನ್ನು ಶಾಲಾ ತರಗತಿಗಳಿಗೆ ಸ್ವತಃ ಉಸ್ತಾದರೇ ಬೈಕ್ ನಲ್ಲಿ ಬಿಟ್ಟು ಬರುವುದು ಉಸ್ತಾದರ ರೂಢಿಯಾಗಿತ್ತು.ಕೆಲವೊಮ್ಮೆ ಅದಕ್ಕಾಗಿ ಬೆಳಗ್ಗಿನ ಉಪಹಾರವನ್ನೇ ತ್ಯಜಿಸಿ ಓಡುತ್ತಿದ್ದ ಆ ಸನ್ನೀವೇಶ ಕಣ್ಣೀರು ತರಿಸುತ್ತದೆ. ಮೂರು ತಿಂಗಳ ಹೆಣ್ಣು ಮಗು ಸಹಿತವಿರುವ ಅವರ ಕುಟುಂಬಕ್ಕೆ ಅಲ್ಲಾಹನು ಕ್ಷಮೆ ನೀಡಿ ಅನುಗ್ರಹಿಸಲಿ... ಉಸ್ತಾದರ ಮರಣ ವಾರ್ತೆಯನ್ನು ತಿಳಿದಾಗಿನಿಂದ ಕೊನೇಯವರೆಗೆ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೂರುಗೋಳಿ ಜಮಾಅತಿನವರ ಆ ಕಾರ್ಯಾಚರಣೆಗಳೂ ಶ್ಲಾಘನೀಯ.. ಪವಿತ್ರ ರಮಳಾನಿನಲ್ಲಿಯೂ ಈದ್ ದಿನದಂದೂ ಮೂರುಗೋಳಿ ಜಮಾಅತಿನವರು ಚಾಚಿದ ಸಹಾಯಹಸ್ತ ಅವರ ಸಂತೋಷವನ್ನೇ ಹಿಮ್ಮಡಿಗೊಳಿಸಿತ್ತು ಅಲ್ಲಾಹನು ಖಬೂಲ್ ಮಾಡಲಿ ...... ✍️ *ಅತಾವುಲ್ಲ ಹಿಮಮಿ ಸಖಾಫಿ ಕುಪ್ಪೆಟ್ಟಿ* *ಖತೀಬರು ಹಝ್ರತ್ ಬಿಲಾಲ್ ಜುಮಾ ಮಸೀದಿ ಮೂರುಗೋಳಿ*
To post your articles and news,please signup. This facility will be available soon. Please wait...
© www.idondusuddi.site. All Rights Reserved. Design by myweb